General Knowledge and important Current affairs Notes
➡️ಭಾರತದ ಪುರಾತತ್ವ ಸಮೀಕ್ಷೆ (ASI) ಇತ್ತೀಚೆಗೆ ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯ ತೇರಿಝಂಧೂರಿನಲ್ಲಿರುವ ಐತಿಹಾಸಿಕ ವೇದಪುರೀಶ್ವರರ್ ಶಿವ ದೇವಾಲಯದಲ್ಲಿ 10 ಚೋಳರ ಯುಗದ ಶಾಸನಗಳನ್ನು ದಾಖಲಿಸಿದೆ
➡️ಭಾರತದ ಪುರಾತತ್ವ ಸಮೀಕ್ಷೆಯನ್ನು 1861 ರಲ್ಲಿ "ಭಾರತೀಯ ಪುರಾತತ್ತ್ವ ಶಾಸ್ತ್ರದ ಪಿತಾಮಹ" ಎಂದು ಕರೆಯಲ್ಪಡುವ 'Alexander Cunningham'ಸ್ಥಾಪಿಸಿದರು.
☑️ಭಾರತದ ಬಿಲ್ಲುಗಾರ್ತಿ ಜ್ಯೋತಿ ಸುರೇಖಾ ವೆಣ್ಣಮ್(Jyothi Surekha Vennam) ವಿಶ್ವಕಪ್ ಫೈನಲ್ನಲ್ಲಿ(World Cup Final) ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕಾಂಪೌಂಡ್ ಬಿಲ್ಲುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು
➡️ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ್ ನಿಧಿ (PM SVANidhi) ಯೋಜನೆಯನ್ನು 2030ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ.
➡️ಈ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಲು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಇದನ್ನು 2020ರ ಜೂನ್ 1ರಂದು ಆರಂಭಿಸಿತು.
➡️ಪ್ರಸ್ತುತ,ಈ ಯೋಜನೆಯಲ್ಲಿ ಫಲಾನುಭವಿಗಳು ₹20,000 ದಿಂದ ₹50,000 ವರೆಗೆ ಶೇ. 7ರಷ್ಟು ಬಡ್ಡಿ ಸಬ್ಸಿಡಿಯೊಂದಿಗೆ ಸಾಲ ಪಡೆಯಬಹುದಾಗಿದೆ.
➡️ಆರ್ಬಿಐನಿಂದ 'ಆಫ್ಲೈನ್ ಡಿಜಿಟಲ್ ರೂಪಾಯಿ'(e₹) ಬಿಡುಗಡೆ.
➡️ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮುಂಬೈನ ಗ್ಲೋಬಲ್ ಫಿನ್ಟೆಕ್ ಫೆಸ್ಟ್ 2025 ರಲ್ಲಿ ಮಹತ್ವದ 'ಆಫ್ಲೈನ್ ಡಿಜಿಟಲ್ ರೂಪಾಯಿ' (e₹) ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ.
➡️ಈ ಡಿಜಿಟಲ್ ಕರೆನ್ಸಿಯ ವಿಶಿಷ್ಟತೆ ಏನೆಂದರೆ,ಇದು ಇಂಟರ್ನೆಟ್ ಅಥವಾ ಮೊಬೈಲ್ ನೆಟ್ವರ್ಕ್ ಸಂಪರ್ಕವಿಲ್ಲದೆಯೂ ಕಾರ್ಯನಿರ್ವಹಿಸುತ್ತದೆ.
➡️ನಿಮ್ಮ ವಾಲೆಟ್ನಲ್ಲಿರುವ ನಗದು (ಕ್ಯಾಶ್) ನಷ್ಟೇ ವಿಶ್ವಾಸಾರ್ಹತೆ ಹೊಂದಿರುವ ಈ e₹ ಅನ್ನು QR ಕೋಡ್ ಸ್ಕ್ಯಾನ್ ಮಾಡಿ ಅಥವಾ ಟ್ಯಾಪ್ ಮಾಡುವ ಮೂಲಕ ಸುಲಭವಾಗಿ ಖರ್ಚು ಮಾಡಬಹುದು, ಇದು ಭಾರತದ ಡಿಜಿಟಲ್ ಹಣಕಾಸು ಪಯಣದಲ್ಲಿ ಮಹತ್ವದ ಮೈಲಿಗಲ್ಲು.
➡️ಭಾರತ ಪುರುಷರ ಫುಟ್ಬಾಲ್ ತಂಡ,ಪ್ರಕಟವಾದ ಫಿಫಾ ರ್ಯಾಂಕಿಂಗ್ನಲ್ಲಿ 136ನೇ ಸ್ಥಾನಕ್ಕೆ ಕುಸಿದಿದೆ.9ವರ್ಷಗಳಲ್ಲಿ ಇದೇ ಮೊದಲ ಬಾರಿ ಭಾರತ ರ್ಯಾಂಕಿಂಗ್ನಲ್ಲಿ ಈ ಮಟ್ಟಕ್ಕೆ ಇಳಿದಿದೆ.
➡️2016ರ ಅಕ್ಟೋಬರ್ನಲ್ಲಿ ಭಾರತ 137ನೇ ಸ್ಥಾನಕ್ಕೆ ಇಳಿದಿದ್ದು,ಈವರೆಗಿನ ಕಳಪೆ ಎನಿಸಿದೆ. 1996ರ ಫೆಬ್ರುವರಿಯಲ್ಲಿ 94ನೇ ಸ್ಥಾನಕ್ಕೇರಿದ್ದು ಇದುವರೆಗಿನ ಅತ್ಯುತ್ತಮ ಸಾಧನೆ ಎನಿಸಿದೆ.
➡️“ರಾಜಧಾನಿ ಬದಲಾವಣೆ”
“ರಾಜಧಾನಿ ಬದಲಾವಣೆ” ಎಂದರೆ
ಒಂದು ರಾಜ್ಯ, ದೇಶ ಅಥವಾ ಸಾಮ್ರಾಜ್ಯದ ನಿರ್ವಹಣಾ ಕೇಂದ್ರ (Capital)ವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವುದು.
ಉದಾಹರಣೆಗಳು:
1. ಭಾರತದಲ್ಲಿ: ಬ್ರಿಟಿಷರು ಮೊದಲು ಕಲ್ಕತ್ತಾ (Kolkata)ಯನ್ನು ರಾಜಧಾನಿಯಾಗಿ ಇಟ್ಟಿದ್ದರು. 1911ರಲ್ಲಿ ಅವರು ರಾಜಧಾನಿಯನ್ನು ದೆಹಲಿ (Delhi)ಗೆ ಸ್ಥಳಾಂತರಿಸಿದರು.
2.ಆಂಧ್ರ ಪ್ರದೇಶದಲ್ಲಿ: 2014ರಲ್ಲಿ ರಾಜ್ಯ ವಿಭಜನೆಯ ನಂತರ ಮೊದಲ ರಾಜಧಾನಿಯಾಗಿ ಅಮರಾವತಿ ಘೋಷಿಸಲಾಯಿತು.ನಂತರ ಸರ್ಕಾರ ವಿಶಾಖಪಟ್ಟಣಂಗೆ ರಾಜಧಾನಿ ಬದಲಾಯಿಸುವ ಪ್ರಸ್ತಾವನೆ ಮಾಡಿತು.
3.ಕರ್ಣಾಟಕದಲ್ಲಿ: ಬೆಂಗಳೂರು ರಾಜ್ಯದ ರಾಜಧಾನಿಯಾಗಿದೆ; ಹಿಂದಿನಲ್ಲಿ ರಾಜಧಾನಿ ಬೇರೆ ಸ್ಥಳಗಳಲ್ಲಿ (ಉದಾ: ಮೈಸೂರು) ಇತ್ತು.
➡️ರಾಜಧಾನಿ ಬದಲಾವಣೆಯ ಕಾರಣಗಳು:
- ಭೌಗೋಳಿಕ ಸೌಕರ್ಯ
- ಆಡಳಿತದ ಸುಲಭತೆ
- ಜನಸಂಖ್ಯೆ ಹಾಗೂ ಮೂಲಸೌಕರ್ಯ
- ರಾಜಕೀಯ ಅಥವಾ ಆರ್ಥಿಕ ಕಾರಣಗಳು
No comments:
Post a Comment